Monday 13 March 2017

ಸಂಖೆ ೭


ಸಂಖ್ಯೆ ೭ ಅಂದರೆ ಕೇತು, ಅಂದರೆ ಬಾಲ. ಬೇರಿನಂತೆ ಬಹಳ ಆಳವಾಗಿ ಹುಡುಕಿಕೊಂಡು ಅವಿಷ್ಕಾರವನ್ನ ಮಾಡುತ್ತಾ ಹೋಗುವಂತಹ ವ್ಯಕ್ತಿಗಳು.
ರೀಸರ್ಚಿಗೆ ಹೇಳಿಸಿದ ವ್ಯಕ್ತಿಗಳು. ಇವರುಗಳು ಜ್ನಾನಿಗಳು. ಇವರುಗಳು ಸುಜ್ನಾನಿಗಳು. ಹಾಗೂ ಇವರುಗಳು ವಿಜ್ನಾನಿಗಳು ಕೂಡ.
ಇವರುಗಳು ಲೀಗಲೀ ಹೋಗುವಂತಹ ಜನರು. ಇವರುಗಳಿಗೆ ಹೇರಾ ಫ಼ೇರಿ ಸರಿ ಹೋಗೋಲ್ಲ. ಒಂದು ರೀತಿಯ ನಿಯತ್ತಿರುವ ಜನರು.
ಇವರುಗಳು ಏಕಾಂಗಿತನವನ್ನ ಲೈಕ್ ಮಾಡುವುದು ಹೆಚ್ಚು. ಕಾರಣ ರೀಸರ್ಚ್ ಮಾಡುವವರೇ ಹಾಗೆ. ಅದಕ್ಕಾಗಿ ಇವರಿಗೆ ಮದುವೆ ಮಾಡುವವರು ಯೋಚಿಸಬೇಕು. ಈ ಸಂಖೆಯನ್ನ ಮದುವೆ ಆದವರ ಹತ್ತಿರ ಅವರುಗಳ ಅನುಭವವನ್ನ ಕೇಳಬೇಕು.
ಸಂಖೆ ೭ ರವರು ಸನ್ಯಾಸಿಗಳು.
ಸಂಖೆ ೭ ರವರು ಆಧ್ಯಾತ್ಮಿಕ ಜೀವನವನ್ನ ಲೈಕ್ ಮಾಡುತ್ತಾರೆ.
ಇವರು ಬಹಳ ಮಾತನಾಡುತ್ತಾರೆಂದರೆ, ಇವರನ್ನ ಇವರಸ್ಟಕ್ಕೇ ಬಿಟ್ಟು ಬಿಡಿ. ಇವರು ಮಾತನಾಡುವುದನ್ನ ನಿಲ್ಲಿಸಿ ಬಿಡುತ್ತಾರೆ.
ಇವರನ್ನ ತಂದೆ ತಾಯಂದಿರು ಜಾಗ್ರತೆಯಾಗಿ ನೋಡಿಕೊಳ್ಳಬೇಕು. ಇಲ್ಲಾಂದ್ರೆ ಇವರದ್ದೇ ಪ್ರಪಂಚದಲ್ಲಿ ತೊಡಗಿಸಿಕೊಳ್ಳುತ್ತಾರೆ.
ನಿಮ್ಮ ಕಿರು ಬೆರಳ ಕೆಳಗೆ ಎರಡು ರೇಖೆಗಳು ಇದ್ದು, ಅವುಗಳಲ್ಲಿ ಒಂದು ಬಹಳ ಆಳವಾಗಿದ್ದಲ್ಲಿ, ನಿಮ್ಮನ್ನ ಕೇತು ಗ್ರಹ ರೂಲ್ ಮಾಡುತ್ತದೆಂದು ಅರ್ಥ.
ಈ ಸಂಖೆಯವರ ಜೊತೆಗೆ ಸಂಖೆ ೨ ರವರು ಬಂದಲ್ಲಿ ಅವರ ರೀಸರ್ಚ್ ಬಹಳ ಜುಮ್ ಅಂತ ಸಾಗುತ್ತೆ. ಉದಾ.:- ರಾಮಗೋಪಾಲ್ ವರ್ಮಾ ಸಂಖೆ ೭ರವರು, ಅದೇ ನಾಗಾರ್ಜುನ ಸಂಖೆ ೨ ರವರು. ಈ ೭-೨ ರ ಕೋಂಬಿನೇಷನ್ ಬಹಳ ಸೂಪರ್!. ಅವರುಗಳ ಸಿನೇಮಾ ಬಹಳ ಹಿಟ್ ಆಗುತೆ.
ಇನ್ನೊಂದು ಉದಾಹರಣೆಯನ್ನ ಕೊಡೋಣವೆಂದರೆ, ಕೆ ಭಾಗ್ಯರಾಜ (೭) -ಸಿಲ್ಕ್ ಸ್ಮಿತಾ (೨)ರನ್ನ ತೆಗೆದುಕೊಳ್ಳಿ. ಕೆ ಭಾಗ್ಯರಾಜರು ಡೈರೆಕ್ಟರ ಆಗಿ ಸಿನೇಮಾವನ್ನ ತೆಗೆದರೆ, ಅದೂ ಕೂಡಾ ಬಹಳ ಹಿಟ್ ಆಯ್ತು.
ಅದೇ ೭ ಮತ್ತು ೩ ರ ಜೋಡಿ ಅಂದರೆ ಗುರುಗಳಾಗುತ್ತಾರೆ. ಈ ಕೆಟೆಗರಿಯಲ್ಲಿ ರವೀಂದ್ರನಾಥ ಠಾಗೂರ್ ಅವರು ಬರುತ್ತಾರೆ.
ಅದೇ ೭ ಮತ್ತು ೪ ರಜೋಡಿ ಹಾಗೂ ೭ ಮತ್ತು ೫ ರ ಜೋಡಿಯವರು ಸದಾ ಸಂಚಾರವನ್ನೇ ಬಯಸುತ್ತಿರುತ್ತಾರೆ. ಅಂದರೆ ಈ ಜೋಡಿ ಬಿಸಿನೆಸ್ ಜೋಡಿ.
ಅದೇ ಹೇಳುತ್ತಾರೆ ನೋಡಿ, ರುಂಡ ಮತ್ತು ಮುಂಡ ಸೇರಿದರೆ ಬಹಳ ದೊಡ್ಡ ಬಿಸಿನೆಸ್ ಟೈಕೂನ್ ಆಗುತ್ತಾರೆಂದು. ೭ , ಮುಂಡ ಹಾಗೂ ೪ ರುಂಡ.
ಅದೇ ೭ - ೬ ರ ಜೋಡಿ ರಾಯಲ್ ಕಿಡ್ಸ್ ಆಗುತ್ತಾರೆ. ಉದಾ:- ಎಲಿಜ಼ೆಬೆತ್-೧.
ಸಂಖೆ ೭ - ೭ ರ ಜೋಡಿ ಕೇಳಲೇ ಬೇಡಿ. ಇವರುಗಳು ಅವಿಷ್ಕಾರವನ್ನ ಮಾಡುತ್ತಲೇ ಇರುತ್ತಾರೆ. ಇವರುಗಳ ಜಾತಕವನ್ನ ಇವರೇ ತಿಳಿದುಕೊಳ್ಳುತ್ತಾರೆಂದರೆ ನಿಮಗೆ ಆಸ್ಚರ್ಯವಾಗುವುದೇ? ಅಗತ್ಯವಿಲ್ಲ.
೭ ಮತ್ತು ೮ ರ ಜೋಡಿ ಹಾಗೂ ೭ ಮತ್ತು ೯ ರ ಜೋಡಿ ಒಳ್ಳೇ ಕ್ರೀಡಾ ಪಟುಗಳಾಗಿ ಮಿಂಚುತ್ತಾರೆ. ಅದಕ್ಕೆ ಉದಾಹರಣೆ:- ಮಹೇಷ ಭೂಪತಿಯವರು.
ಸಂಖೆ ೭ ರವರು ವಲಸೆ ಹೋಗುವ ಜನರು. ಇವರು ಇವರ ನೇಟಿವ್ ಲೇಂಡ್ಸ್ನಲ್ಲಿ ಶೈನ್ ಆಗುವುದು ಬಹಳ ಕಡಿಮೆ. ಇದಕ್ಕೆ ಉದಾ:- ಇವಾನ್ ಲಿಂಡಾಲ್.
ಈ ಸಂಖೆಯವರು ದೇಷವನ್ನ ಬಿಟ್ಟು ಕೋಷವನ್ನ ಕಟ್ಟುವವರು.
ಸಿನೇಮಾ ರಂಗದಲ್ಲಿ ಶ್ರೀಯುತರಾದ ಕಮಲ್ ಹಾಸನ್ ಅವರನ್ನ ತೆಗೆದುಕೊಳ್ಳಿ. ಇವರು ಸಂಖೆ ೭. ಇವರಿಗೆ ಸಂಖೆ ೨ ಚೆನ್ನಾಗಿ ಕೂಡಿ ಬರುತ್ತೆ.
ಅದೇ ಸಂಖೆ ೩ ವಿಲನ್ ಆಗಲು ಲಾಯಕ್. ಅಂದರೆ ಸಂಖೆ ೩ ರ ಜೊತೆಯಲ್ಲಿ ಕ್ಲೇಷ್ ಆಗುತ್ತೆ. ಅದೇ ಚಿನೇಮಾ ರಂಗದ ಶ್ರೀಯುತರಾದ ರಜನೀಕಾಂತ್ ಅವರು ಸಂಖೆ ೩ ರವರು. ಕಮಲಹಾಸನ್ ಅವರ ಜೊತೆಯಲ್ಲಿ ರಜನೀಕಾಂತರ ಜೋಡಿ ಇವತ್ತಿಗೆ ಬರಲೇ ಇಲ್ಲ ಅಂದರೂ ತಪ್ಪಾಗದು.
ಅದೇ ಕಮಲಹಾಸನ್ (೭) ಮತ್ತು ಶ್ರೀದೇವಿ (೪) ಬಹಳ ಹಿಟ್.
ಸಂಖೆ ೩ ಕ್ಕೆ ೩,೮, ಮತ್ತು ೯ ಡೆಡ್ ಓಪೊಸಿಟ್ ಸಂಖೆಗಳು. ಕೆ ಬಾಲಚಂದರ್ ಸಂಖೆ ೯ ರವರು. ಸಾರಿಕಾ ಸಂಖೆ ೮ ರವರು ಮತ್ತು ಅದೇ ಕಮಲಹಾಸನ್ ಅವರು ಸಂಖೆ ೭. ಕಮಲ ಹಾಸನ್ ಮತ್ತು ಶರಿಕಾ ಜೋಡಿ ಒಡೆದುದರ ಬಗ್ಗೆ ನಿಮಗೆ ತಿಳಿದೇ ಇದೆ.
ಪ್ರಾಣಿ ಮುಖದ ದೇವರುಗಳಾದ ವಿನಾಯಕ, ವರಾಹ, ಆಂಜನೇಯ, ಉಗ್ರ ನರಸಿಂಹ ಇವರಿಗೆ ಪ್ರಧಾನ ದೇವತೆ / ದೇವರುಗಳು.
ಈ ಸಂಖೆಯವರು ಮದುವೆ ಆಗದೇ ಇರುವುದು ಜಾಸ್ತಿ. ಒಂದು ವೇಳೆ ಮದುವೆ ಆದಲ್ಲಿ ಡೈವೋರ್ಸ್ ರೇಟ್ ಕೂಡಾ ಈ ಸಂಖೆಯವರಲ್ಲಿ ಜಾಸ್ತಿ ಇರುತ್ತದೆ.
ಇವರಿಗೆ ಬೆಸ್ಟ ಲಕ್ಕಿ :- ಕೂಬ್ ೨,೪,೬. ಹೆಚ್ಚಾಗಿ ೨ ಮತ್ತು ೪ ಇವರನ್ನ ಫ಼ೋಲೋ ಮಾಡುತ್ತೆ. ಸಂಖ್ಯೆ ೪ ಬಹಳ ಸೂಪರ್.
ಇವರಿಗೆ ಅನ್ಲಕ್ಕಿ ಕೂಬ್ ಅಂದರೆ ೩.೮ ಮತ್ತು ೯.
ಇವರಿಗೆ ಹುರಳಿ ಬಹಳ ಇಸ್ಟ. ಒಂದು ಹಿಡಿ ಹುರಳೀ ಕಾಳನ್ನ ತಲೆ ದಿಂಬಿನಡಿ ರಾತ್ರಿ ಇಟ್ಟು, ಮರುದಿನ ಅರಳೀ ಮರದ ಬುಡಕ್ಕೆ ಹಾಕಿ ಬನ್ನಿ. ಅದೇ ರೀತಿ ೭ ಮಂಗಳವಾರದಂದು ಮಾಡಿದಲ್ಲಿ ಬಹು ವಿಶೇಷ ರೀತಿಯಲ್ಲಿ ನಿಮಗೆ ಸುಖವನ್ನ ಕೊಡುತ್ತೆ.
ಗರಿಕೆ ಹುಲ್ಲು ಕೇತುವಿಗೆ ಶ್ರೇಷ್ಠ. ಅಂತೆಯೇ ವಿನಾಯಕನಿಗೂ ಕೂಡ.


No comments:

Post a Comment