Saturday 11 March 2017

೯ ಗ್ರಹಗಳು ಮತ್ತು ಅದರ ವಿಶೇಷ ಗುಣಗಳು.

೯ ಗ್ರಹಗಳು ಮತ್ತು ಅದರ ವಿಶೇಷ ಗುಣಗಳು.



ರವಿ :-

·      ರವಿಯು ಸಿಂಹ ರಾಶಿಯ ಅಧಿಪತಿ
·      ಇದು ಅಗ್ನಿ ತತ್ವದ ಗ್ರಹ.
·      ಪುರುಷ ಗ್ರಹ.
·      ಸರ್ಕಾರಿ ನೌಕರಿಯಲ್ಲಿ ಇರುವವರು.
·      ಅಧಿಕಾರವನ್ನ ನಡೆಸುವವರು.
·      ದರ್ಪದಿಂದ ಸದಾ ಇರುವವರು.
·      ಅಹಂಕಾರದಿಂದ ಮೆರೆಯುವವರು.
·      ಆಡಳಿತ (ಇವರು ಆಡಳಿತವನ್ನ ಚೆನ್ನಾಗಿ ಮಾಡುತ್ತಾರೆ.)
·      ನಾಯಕತ್ವವನ್ನ ಬಯಸುವವರು.
·      ಒಂಟಿಯಾಗಿ ಕುಳಿತು ಯೋಚನೆಯನ್ನ ಮಾಡುವವರು
·      ನ್ಯಾಯ ತೀರ್ಮಾನವನ್ನ ಮಾಡುವವರು.
·      ಗುಂಡಾದ ಮುಖವಿರುವವರು
·      ಇಅವ್ರುಗಳ ಮುಖ, ಅಸ್ಟೊಂದು ಆಕರ್ಷಣೆ ಇರೋದಿಲ್ಲ(ಕಾರಣ ಸಿಂಹದ ಮುಖವೇ ಹಾಗೆ).
·      ಉಗ್ರ ಮನಸ್ಸಿರುವವರು.
·      ಬಹಳ ಕೋಪಿಸ್ಟರು
·      ಕಠಿಣ ಹೃದಯ ಇರುವವರು.
·      ಶಿಕ್ಷೆಯನ್ನ ಕೊಡುವವರು.ಕಾರಣ ಇದು ರಾಜನ ರಾಶಿ.
·      ಹೆಚ್ಚಿಗೆ ಕ್ಷಮಾಯಾಚನೆ ಇರೋಲ್ಲ ಇವರಲ್ಲಿ.
·      ಗಂಭೀರ ನಡಿಗೆ ಉಳ್ಳವರು.
·      ಒಳ್ಳೇ ಶ್ರೀಮಂತ ಗ್ರಹ
·      ಸದಾ ಗೆಲ್ಲುವ ಹಂಬಲ
·      ಇವರಿಗೆ ವಾಹನ ಸುಖವಿರುತ್ತದೆ.
·      ಯಾವಾಗಲೂ ಡೋಮಿನೇಷನ್ ನೇಚರ್ ಇರುವವರು.
·      ಮುಖ್ಯ ಮಂತ್ರಿ, ಮಂತ್ರಿ, ಎಮ್.ಎಲ್.ಏ ಎಲ್ಲಾ ಸಿಂಹ ರಾಶಿಯವರು.
·      ರವಿಯನ್ನ ಕ್ರೂರ ಗ್ರಹವೆಂದೂ ಕರೆಯುತ್ತಾರೆ.
·      ರವಿಯು ಜ್ನಾನವಂತ ಗ್ರಹ. ಆದರೆ ವಿದ್ಯಾವಂತ ಗ್ರಹವಲ್ಲ.
·      ರವಿಯ ಸಂಖೆ ೧.
·      ಪಿತೃ ಕಾರಕ.
·      ಉಛ್ಛ ಸ್ಥಾನ ಮೇಷ ರಾಶಿ
·      ಉಛ್ಛಾಂಶ ೧೦ *
·      ಮೂಲ ತ್ರಿಕೋಣ ಸಿಂಹ ರಾಶಿ
·      ದಶಾ ಅವಧಿ ೬ ವರುಷ.
·      ಒಂದು ರಾಶಿಯಿಂದ ಇನ್ನೊಂದು ರಾಶಿಗೆ ೧ ತಿಂಗಳು.
·      ಧಾನ್ಯ ಗೋಧಿ.
·      ದಿಕ್ಕು ಪೂರ್ವ
·      ಕಾರಕ ಪಿತ್ಥ
·      ನೀಚ ಸ್ಥಾನ ತುಲಾ ರಾಶಿ
·      ರವಿಯು ಮೂಳೆಯ ಕಾರಕ.
·      ಇಂದ್ರಿಯ :- ಕಣ್ಣು.
·      ಗೃಹ ಮಿತ್ರ :-ಚಂದ್ರ, ಕುಜ,ಗುರು, ಕೇತು.
·      ಶತ್ರು :- ಶನಿ,ಶುಕ್ರ, ರಾಹು.
·      ಸಮ ಗ್ರಹ :- ಬುಧ
·      ರವಿಯ ರತ್ನ ಮಾಣಿಕ್ಯ
·      ರವಿಯ ಬಣ್ಣ ಕೆಂಪು ಮತ್ತು ಗುಲಾಬಿ.
·      ಪೀತಾಂಬರ ಇವರ ಮೆಟಲ್. 

ಚಂದ್ರ :-  

·      ಕಟಕ ರಾಶಿಯ ಅಧಿಪತಿ.
·      ಜಲತತ್ವದ ಗ್ರಹ.
·      ಶಾಂತ ಸ್ವಭಾವದ ಗ್ರಹ.
·      ಸುಂದರ ಕಣ್ಣುಗಳು ಇರುವವರು.
·      ಕರುಣೆ ಇರುವವರು.
·      ಸ್ತ್ರೀ ಗ್ರಹ.
·      ಸಭ್ಯತೆ ಜಾಸ್ತಿ.
·      ಮಾತೃ ಹೃದಯ ಇರುವವರು.
·      ಚಂದ್ರನೂ ಸೂರ್ಯನಂತೆ ಅಧಿಕಾರ ಗ್ರಹ.
·      ಇವರು ದಕ್ಷ ಆಡಳಿತಕಾರರು.
·      ಆದರೆ ಇವರು ಹೊಂದಾಣಿಕೆಯನ್ನ ಮಾಡುವಂತಹವರು. ಕಾರಣ ಶಾಂತತೆಯೇ ಪ್ರಾಧಾನ್ಯ ಇವರಿಗೆ.
·      ಕಠಿಣ ಹೃದಯ ಇರುವವರು. ( ಯಾಕೆಂದರೆ ತಾಯಿ ಮಕ್ಕಳನ್ನ ಹೊಡೆಯುತ್ತಿರುತ್ತಾರೆ)
·      ಪರರಿಗೆ ಉಪಕಾರವನ್ನ ಮಾಡುವರು.
·      ಜನರಿಗೆ ಸಹಾಯವನ್ನ ಮಾಡುವವರು.
·      ಶ್ರೀಮಂತ, ಜ್ನಾನವಂತ, ಹಾಗೂ ವಿದ್ಯಾವಂತ ಗ್ರಹ.
·      ಓದದೇನೇ ಜ್ನಾನವನ್ನ ಪಡೆಯುವವರೆಂದರೆ, ಇವರುಗಳು. ಎಲ್ಲಾ ವಿಷಯಗಳಲ್ಲಿ ಒಳ್ಳೇ ಮಾಹಿರತೆ ಉಂಟು.
·      ಒಳ್ಳೇ ಜ್ಯೋತಿಷ್ಯಗಾರನಿಗೆ ಚಂದ್ರನು ಒಳ್ಳೆಯವನಾಗಿರಬೇಕು.
·      ಚಂದ್ರನು ಕ್ಷಮಾದಾಯಕ ಗ್ರಹ.
·      ಇವರುಗಳು ಆಭರಣ ಪ್ರಿಯರು.
·      ವಿವಿಧ ವಸ್ತುಗಳ ಪ್ರಿಯರು.
·      ವೈಭವ ಜೀವನವನ್ನ ನಡೆಸುವವರು.
·      ಇವರಿಗೆ ವಾಹನ ಸುಖವಿರುತ್ತದೆ.
·      ಆದರೆ ಇಲ್ಲಿ ಸೇವಕರು ಡ್ರೈವ್ ಮಾಡಲು ಇರುತ್ತಾರೆ. ಇವರುಗಳು ಸಾಮಾನ್ಯವಾಗಿ ಮಾಡೋಲ್ಲ.
·      ಇಲ್ಲಿ ಹೆಚ್ಚಿಗೆ ಸ್ವತಂತ್ರ ಮನೋಭಾವನೆ ಇರುತ್ತದೆ.
·      ಇವರು ಕುಟುಂಬ ನಿರ್ವಹಣೆಯಲ್ಲಿ ನಿಸ್ಸೀಮರು. ಪೈಸ ಪೈಸ ಲೆಕ್ಕ ಹಾಕುತ್ತಾರೆ.
·      ಒಳ್ಳೇ ಆಹಾರವನ್ನ ತಯ್ಯಾರು ಮಾಡುವವರು.
·      ಇವರುಗಳು ಒಳ್ಳೇ ಭೋಜನ ಪ್ರಿಯರು ಕೂಡ. ಆಲ್ತು, ಫ಼ಾಲ್ತು ತಿನ್ನೋಲ್ಲ.
·      ಇವರುಗಳಿಗೆ ಅಡಿಗೆ ಪರ್ಫ಼ೆಕ್ಟ್ ಆಗಬೇಕು.
·      ಚಂದ್ರನ ಸಂಖೆ ೨
·      ಚಂದ್ರನ ಮಿತ್ರರು ರವಿ ಮತ್ತು ಬುಧ ಹಾಗೂ ಕೇತು.
·      ಶತ್ರು ರಾಹು.
·      ಸಮ ಗ್ರಹಗಳು ಕುಜ, ಗುರು, ಶುಕ್ರ ಮತ್ತು ಶನಿ.
·      ಚಂದ್ರ ಮಾತೃ ಕಾರಕ.
·      ಉಛ್ಛ ಸ್ಥಾನ :- ವೃಷಭ ರಾಶಿ.
·      ನೀಚ ಸ್ಥಾನ :- ವೃಸ್ಚಿಕ ರಾಶಿ.
·      ದಶಾ ವರ್ಷ :- ೧೦
·      ಮೂಲ ತ್ರಿಕೋಣ :- ಕರ್ಕ ರಾಶಿ.
·      ಉಛ್ಚಾಂಶ :- ೩ *
·      ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಅವಧಿ ೨ ೧/೨ ದಿನ
·      ದಿಕ್ಕು :- ವಾಯೂವ್ಯ.
·      ಕಾರಕ :- ಕಫ
·      ಲೋಹ :- ಬೆಳ್ಳಿ.
·      ಅಂಗಾಂಗ :- ರಕ್ತ.
·      ಇಂದ್ರಿಯ :- ನಾಲಿಗೆ.
·      ಧಾನ್ಯ :- ಅಕ್ಕಿ
·      ಇವರ ರತ್ನ ಮುತ್ತು.
·      ಇದೇ ಚಂದ್ರ ಋಣಾತ್ಮಕನಾದಲ್ಲಿ, ಹೊಟ್ಟೇ ಕಿಚ್ಚು ಬಹಳ.
·      ಇವರಲ್ಲಿ ಶಕ್ತಿ ಹೀನತೆ ಉಂಟಾಗುತ್ತದೆ.
·      ಅಜೀರ್ಣತೆ ಜಾಸ್ತಿ
·      ಆವಾಗಾವಾಗ ಟಾಯಿಲೆಟ್ಟಿಗೆ ಹೋಗುತ್ತಿರುತ್ತಾರೆ.
·      ಹೊಟ್ಟೇ ಸಂಬಂಧಿತ, ಅಂದರೆ ಜಲ ಸಂಬಂಧಿತ ಕಾಹಿಲೆಗಳು ಜಾಸ್ತಿ.
·      ಅದೇ ಚಂದ್ರ ಕೆಟ್ಟಲ್ಲಿ, ವಾಮಾಚಾರಕ್ಕೆ ಇಳಿಯುತ್ತಾರೆ.
·      ಇವರು ಚಂದ್ರನಂತೆ ಬಳುಕು ದೇಹ. ಇವರ ಕಟ್ಟಿ ಹಿಂದೆ ಬಂದಿರುತ್ತದೆ.

ಕುಜ ಗ್ರಹ :-

·      ಮೇಷ ಹಾಗೂ ವೃಸ್ಚಿಕ ರಾಶಿಗಳ ಅಧಿಪತಿ.
·      ಅಗ್ನಿ ತತ್ವದ ಗ್ರಹ. ಅದಕ್ಕೇ ಮೇಷ ರಾಶಿಯ ಕುಜನಿಗೆ ಪ್ರಾಮುಖ್ಯತೆ ಜಾಸ್ತಿ.
·      ವೃಸ್ಚಿಕ ರಾಶಿಯ ಕುಜನ ಜಲ ತತ್ವಕ್ಕೆ ಅಸ್ಟೇನೂ ಪ್ರಾಮುಖ್ಯತೆ ಕೊಡೋಲ್ಲ.
·      ಕುಜನು ಪುರುಷ ಗ್ರಹ.
·      ಈತ ಉಗ್ರ ಗ್ರಹನೂ ಹೌದು.
·      ಒಳ್ಳೇ ಕೋಪಿಸ್ಠರು.
·      ಬಣ್ಣ ರಕ್ತ ಕೆಂಪು.
·      ದೇಹದಲ್ಲಿಯ ರಕ್ತ ಸೂಚಕ ಗ್ರಹ.
·      ಹೊಡೆದಾಟಕ್ಕೆ, ಬಡಿದಾಟಕ್ಕೆ ಕಾರಕ ಗ್ರಹ.
·      ಆದರೆ ಪರೋಪಕಾರಿ ಗ್ರಹ.
·      ಸಾಮಾನ್ಯವಾಗಿ ಗೆಲ್ಲುವ ಗ್ರಹ.
·      ಅಸ್ತ್ರ ಶಸ್ತ್ರಗಳ ಬಳಕೆಯನ್ನ ಮಾಡುವಂತಹ ಗ್ರಹ.
·      ಪರರನ್ನ ಪೀಡಿಸುವ ಗ್ರಹ.
·      ಸಮಾಜ ಘಾತಕ ಕೆಲಸಗಳನ್ನ ಮಾಡುವಂತಹ ಗ್ರಹ.
·      ಆಕ್ರೋಷದ ಗ್ರಹ.
·      ಒಂದು ಸಾಲಿನಲ್ಲಿ ನಿಂತಲ್ಲಿ, ಹಿಂದಿದ್ದವ ಕ್ರಮ ತಪ್ಪಿ ಮುಂದೆ ಹೋಗಿ ನಿಂತಿರುತ್ತಾನೆ.
·      ಶರೀರ ಶಕ್ತಿಯನ್ನ ಉಪಯೋಗಿಸುವವ. ಯುಕ್ತಿಯನ್ನಲ್ಲ.
·      ಕಿರುಚಿ ಅಥವಾ ಜೋರಾಗಿ ಮಾತನಾಡುವ ಗ್ರಹ.
·      ಶರೀರ ಬಹಳ ಕಟ್ಟು ಮಸ್ತಾಗಿರುತ್ತೆ.
·      ಆರೋಗ್ಯವಂತ ಗ್ರಹ.
·      ನ್ಯಾಯವನ್ನ ಕೊಡಿಸುತ್ತಾರೆ.
·      ಸಮಾಜ ಸೇವೆಯೇ ಇವರ ಗುರಿ. (ಪೋಲೀಸ್ ಹುದ್ದೆ, ಮಿಲಿಟರಿ ಹುದ್ದೆ, ನೇವ್ವಿ ಹುದ್ದೆ, ಆರ್ಮ ಗಾಡ್ಸ್ ಹುದ್ದೆ ಹೀಗೆ ಎಲ್ಲಿ ಡ್ರೆಸ್ಸ್ ಕೋಡ್ ಇರುತ್ತವೆಯೋ ಅಲ್ಲಿ ಇವರದ್ದೇ ಗುಂಪು. ಖಾದಿ ಧರಿಸುವವರೂ ಹೆಚ್ಚು ಇವರೇ. ಅಂದರೆ ಮಂಗಲ್ ಬಹಳ ಸ್ಟ್ರೋಂಗ್)
·      ಇವರದ್ದು ಕುಟುಂಬ, ನಾಡು, ದೇಷದ ರಕ್ಷಣೆಯೇ ಗುರಿ.
·      ಹಿಟ್ಲರ್ ಅಂದಾಕ್ಷಣ ಕುಜನ ನೆನಪಾಗಬೇಕು ನಿಮಗೆಲ್ಲಾ.
·      ಟೆರ್ರೋರಿಸ್ಟ್ಸಗಳೆಲ್ಲಾ ಯುವಕರೇ, ಹಾಗೂ ಇವರಲ್ಲಿ ಕುಜನು ಬಹಳ ಸ್ಟ್ರೋಂಗ್.
·      ಕೆಂಪು ಬಣ್ಣದ ಹವಳ ಇವರ ರತ್ನ.
·      ಇವರಿಗೆ ಆಟಕ್ಕೆ ಬೇಕಾಗುವ ಶಕ್ತಿ ಕುಜನು ಕೊಡುತ್ತಾನೆ. ಆದರೆ ಆಟಕ್ಕೆ ಕಾರಕನಲ್ಲ.
·      ಸಂಖೆ ೯
·      ಕಾರಕತ್ವ ಭ್ರಾತೃ
·      ಉಛ್ಛಕ್ಷೇತ್ರ ಮಕರ ರಾಶಿ.
·      ನೀಚ ಕ್ಷೇತ್ರ ಕರ್ಕ ರಾಶಿ.
·      ದಶಾ ವರ್ಷ ೭.
·      ಅಂಗಾಂಗ :- ಮಜ್ಜೆ.
·      ಉಛ್ಚಾಂಶ :- ೨೮*
·      ಓಮ್ದು ರಾಶಿಯಿಂದ ಇನ್ನೊಂದು ರಾಶಿಗೆ ೪೫ ದಿನಗಳು.
·      ದಿಕ್ಕು :- ದಕ್ಷಿಣ
·      ಲೋಹ : ತಾಮ್ರ
·      ದೃಸ್ಟಿ :- ೪,೭ ಮತ್ತು ೮.
·      ಮಿತ್ರ ಗ್ರಹಗಳಿ :- ಗುರು, ರವಿ ಮತ್ತು ಚಂದ್ರ
·      ಶತ್ರುಗಳು :- ಬುಧ
·      ಸಮ ಗ್ರಹಗಳು :- ಶುಕ್ರ ಮತ್ತು ಶನಿ.



ಬುಧ ಗ್ರಹ:-

·      ಮಿಥುನ ಮತ್ತು ಕನ್ಯಾ ಅಧಿಪತಿ.
·      ಇವರುಗಳು ಪಾದರಸದಂತೆ ಬಹಳ ಚುರುಕು ಸ್ವಭಾವ.
·      ಎಲ್ಲವುದರಲ್ಲಿಯೂ ಚುರುಕುತನ. ಬರೇ ೫ ನಿಮಿಷಗಳಲ್ಲಿ ಇವರ ಸ್ನಾನ ಮುಗಿಯುತ್ತದೆ.
·      ಬರೇ ೩ ನಿಮಿಷಗಳಲ್ಲಿ ಇವರ ಊಟ ಮುಗಿಯುತ್ತೆ.
·      ಮಾತು ಕೂಡ ಹಾಗೆಯೇ, ಒಳ್ಳೇ ಅರಳು ಹೊಟ್ಟಿದ ಹಾಗೆ ಮಾತನಾಡುತ್ತಾರೆ.
·      ಕಾರಣ ಬುಧನು ಕಮ್ಯುನಿಕೇಷನ್ ಗ್ರಹ.
·      ಮಿಥುನದಲ್ಲಿ ಧನಾತ್ಮಕ(+ವ್) ಮತ್ತು ಕನ್ಯಾದಲ್ಲಿ ಋಣಾತ್ಮಕ (-ವ್)
·      ಆದ್ದರಿಂದ ಮಿಥುನದ ವಾಯು ತತ್ವಕ್ಕೇ ಪ್ರಾಧಾನ್ಯ ಜಾಸ್ತಿ.
·      ಕನ್ಯಾದ ಪ್ರಥ್ವೀ ತತ್ವಕ್ಕೆ ಅಸ್ಟೇನೂ ಪ್ರಾಧಾನ್ಯ ಕೊಡೋಲ್ಲ.
·      ಎಲ್ಲಾ ಪುರುಷ ರಾಶಿಗಳಲ್ಲಿ ಗ್ರಹಗಳು ಶಕ್ತಿಶಾಲಿಗಳಾಗಿರುತ್ತವೆ.
·      ಎಲ್ಲಾ ಸ್ತ್ರೀ ರಾಶಿಗಳಲ್ಲಿ ಅವುಗಳು ಋಣಾತ್ಮಕವಾಗಿರುತ್ತವೆ.
·      ಇವರುಗಳಲ್ಲಿ ಸದಾ ಎನಾದರೊಂದು ಕಲಿಯುವ ಚಟ ಜಾಸ್ತಿ.
·      ಆದರೆ ಬುಧನದ್ದು ಮಕ್ಕಳ ಸ್ವಭಾವ. ಎಸ್ಟೇ ವಯಸ್ಸಾದರೂ ಚಿಕ್ಕ ಮಕ್ಕಳಂತೆ ವರ್ತಿಸುತ್ತಾರೆ.
·      ಒಳ್ಳೇ ಶೇಪ್ ಇರುವಂತಹವರು ಬುಧ ಗ್ರಹ.
·      ಇವರಲ್ಲಿ ಕಾಲು ಮತ್ತು ದೇಹ ಒಂದೇ ಅಳತೆಯದ್ದಾಗಿರುತ್ತದೆ.
·      ವ್ಯಾಪಾರ ಮನೋಭಾವ ಪ್ರತಿಯೊಂದರಲ್ಲಿಯೂ. ವರದಕ್ಷಿಣೆ ವಿಚಾರದಲ್ಲಿಯೂ ಕೂಡ ವ್ಯಾಪಾರ ಭಾವನೆ ಜಾಸ್ತಿ.
·      ಬಹು ಬುದ್ಧಿವಂತ ಗ್ರಹ. (Extra Ordinary Brilliance.)
·      ಗೂಢ ವಿದ್ಯಗಳನ್ನ ಅಧ್ಯಯನ ಮಾಡುವುದು ಇವರುಗಳು ಜಾಸ್ತಿ.
·      ಸಂಶೋಧನಾ ಮನೋಭಾವನೆ ಜಾಸ್ತಿ.(Researech Oriented.)
·      ಇವರುಗಳು ಹಣ ಕಾಸಿನ ವ್ಯವಹಾರಗಳನ್ನ ಮಾಡುವವರು. ಅದೇ ಗುರು ಗ್ರಹವು ಹಣ ಕಾಸಿನ ಸಂಸ್ಥೆಯಲ್ಲಿ ಕೆಲಸವನ್ನ ಮಾಡುವವರು.
·      ಯಾವಾಗಲೂ ಹೊಸತನ್ನೇ ಬಯಸುವರು.
·      ಹಳೇದಲ್ಲ ಇಸ್ಟ ಆಗೋಲ್ಲ ಇವರಿಗೆ.
·      ಎಲ್ಲಾ ಕಲೆಗಳಲ್ಲಿ(ನೃತ್ಯ, ಸಂಗೀತ, ಇತ್ಯಾದಿ) ಅಭಿರುಚಿ ಜಾಸ್ತಿ.
·      ಸಾಹಿತ್ಯದಲ್ಲಿಯೂ ಇವರುಗಳು ಅಭಿರುಚಿಯನ್ನ ತೋರಿಸುವರು.
·      ಒಳ್ಳೇ ಬರೆವಣಿಕೆಗಾರರು.
·      ಒಳ್ಳೇ ಜ್ಯೋತಿಷ್ಯಗಾರರು.
·      ಆಟಗಳಲ್ಲಿ , ಅದೂ (Indoor or Outdoor Activities) ಯಾವುದೇ ಆಟ ಇರಬಹುದು.
·      ಈ ಆಟಗಳಿಗೆ ಬೇಕಾಗುವ ಎನರ್ಜಿಯನ್ನ ಕೊಡುವ ಗ್ರಹ ಮಾತ್ರ ಕುಜ.
·      ಇವರು ಕಾಣಲು ಸಣ್ಣಕ್ಕೆ, ಉದ್ದಕ್ಕೆ ಇರುತ್ತಾರೆ. ಸೊರಗಿ ಹೋದವರಂತೆ ಕಾಣಿಸುತ್ತಾರೆ.
·      Experts in Fine Arts (ಇವುಗಳಲ್ಲಿ ಬುಧ ಮತ್ತು ಶುಕ್ರನ ಪಾತ್ರ ಬಹು ದೊಡ್ಡದು.)
·      ಇವರೊಬ್ಬರು ಉತ್ತಮ ಪ್ರಾಧ್ಯಾಪಕರು.
·      ಅಧಿಕ ಭೂಮಿ, ಹಣ, ಒಡವೆಗಳ ಸಂಗ್ರಹ ಜಾಸ್ತಿ ಇವರುಗಳಿಗೆ.
·      ವಾಹನಗಳನ್ನೂ ಸಂಗ್ರಹ ಮಾಡುವಲ್ಲಿ ಇವನದ್ದೇ ಎತ್ತಿದ ಕೈ.
·      ಮ್ರಧು ಭಾಷಿ.
·      ಜಗಳ ಆಡೋಲ್ಲ. ಕಾರಣ ನಪುಂಸಕ ಗ್ರಹ. ಆದರೆ ಮೋಸ ಮಾಡುವುದರಲ್ಲಿ ಎತ್ತಿದ ಕೈ.
·      ಇವರ ಮುಖದಲ್ಲಿ ಮುಗ್ಧತೆ ಜಾಸ್ತಿ.
·      ಇದೇ ಬುಧನು ಋಣಾತ್ಮಕನಾಗಿದ್ದಲ್ಲಿ:- ಚರ್ಮ ರೋಗ, ಅಜೀರ್ಣತೆ ಜಾಸ್ತಿ.
·      -ವ್ ಬುಧನು ಅವರನ್ನ ಕುಂತಲ್ಲೇ ಕುಳಿತಿರುವಂತೆ ಮಾಡುತ್ತಾನೆ.
·      ಸಿಕ್ಕಾಪಟ್ಟೆ ಅಶುತ್ವವಾಗಿರುತ್ತಾರೆ.
·      ಬಣ್ಣ ಗಿಳಿ ಹಸಿರು.
·      ರತ್ನ ಪಚ್ಚೆ ಅಥವಾ ಪನ್ನ.
·      ದೊಡ್ಡ ತರದ ಮೋಡೆಲಿಂಗಿಗೆ ಬುಧನೇ ಅಧಿಪತಿ.
·      ಸಂಖೆ ೫.
·      ಕಾರಕತ್ವ :- ಕರ್ಮ
·      ಉಛ್ಚ ಕ್ಷೇತ್ರ :- ಕನ್ಯಾ ರಾಶಿ.
·      ಉಛ್ಚಾಂಶ :- ೧೫*
·      ನೀಚ ಕ್ಷೇತ್ರ :- ಮೀನ ರಾಶಿ.
·      ದಶಾ ವರ್ಷ :- ೧೭
·      ಮೂಲ ತ್ರಿಕೋಣ :- ಕನ್ಯಾ ರಾಶಿ.
·      ಅಂಗಾಂಗ :- ಚರ್ಮ.
·      ಒಂದು ರಾಶಿಯಿಂದ ಇನ್ನೊಂದು ರಾಶಿಗೆ ೧ ತಿಂಗಳು.
·      ಧಾನ್ಯ :- ಹೆಸರು ಕಾಳು.
·      ದಿಕ್ಕು :- ಉತ್ತರ.
·      ಕಾರಕ ತ್ರಿದೋಷ.
·      ಲೋಹ :- ಸೀಸ
·      ಮಿತ್ರ ಗ್ರಹಗಳು :- ಸೂರ್ಯ ಮತ್ತು ಶುಕ್ರ
·      ಶತ್ರು :- ಚಂದ್ರ
·      ಸಮ ಗ್ರಹ :- ಶನಿ, ಕುಜ ಮತ್ತು ಗುರು.

ಗುರು ಗ್ರಹ :-

·      ಮೀನದಲ್ಲಿ ಆಕಾಶ ತತ್ವ ಹಾಗೂ ಧನುಸ್ಸನಲ್ಲಿ ಅಗ್ನಿ ತತ್ವ
·      ಇಲ್ಲಿ ಧನುಸ್ಸಿನ ಅಗ್ನಿಗೇ ಪ್ರಾಮುಖ್ಯತೆಯನ್ನ ಕೊಡುತ್ತೇವೆ.
·      ಇದು ದೊಡ್ಡ ಅಗ್ನಿ.
·      ಗಾತ್ರದಲ್ಲಿ ದೊಡ್ಡ ಗ್ರಹ. ಅಂತೆಯೇ ಮನುಷ್ಯರೂ ಗುಂಡಾಗಿ ದಪ್ಪವಾಗಿರುತ್ತಾರೆ.
·      ಒಳ್ಳೇ ವಿದ್ಯಾವಂತರು.
·      ಬಹಳ ತೇಜಸ್ವಿಗಳು
·      ಧರ್ಮ ಪ್ರಚಾರಕರು ಹಾಗೂ ಧರ್ಮ ಭೋದಕರು.
·      ಆದ್ದರಿಂದ ಇವರುಗಳಲ್ಲಿ ಧರ್ಮ ಗುರುಗಳೇ ಜಾಸ್ತಿ.
·      ಉಪಾಧ್ಯಾಯ ವೃತ್ತಿಯಲ್ಲಿ ಇವರೇ ಜಾಸ್ತಿ ಕಾಣಿಸುತ್ತಾರೆ.
·      ಇವರುಗಳು ಧರ್ಮ ಛತ್ರಗಳನ್ನ ಕಟ್ಟುವರು.
·      ಜನತಾ ಸೇವೆ ಜಾಸ್ತಿ. ಇವರು ಸಮಾಜ ಸೇವೆ ಅಲ್ಲ, ಸಮಾಜ ಕಲ್ಯಾಣ ಜಾಸ್ತಿ ಮಾಡುತ್ತಾರೆ.
·      ಇವರು ಇರುವುದೇ ಲೋಕ ಕಲ್ಯಾಣ ಹಾಗೂ ಸಮಾಜ ಕಲ್ಯಾಣಕ್ಕಾಗಿ.
·      ಬಡವರಿಗೆ, ಜನರಿಗೆ ಆಶ್ರಯಗಳನ್ನ ಕಟ್ಟಿಸಿ ಕೊಡುತ್ತಾರೆ.
·      ಬೇರವರ ತಪ್ಪನ್ನ ತಿದ್ದುವಂತಹವರು. ಇದೇ ಬುದ್ಧಿ ಕುಂಭ ರಾಶಿಯವರಿಗುಂಟು.
·      ಪ್ರಪಂಚಕ್ಕೇ ಕಾನೂನನ್ನ ಬದಲಾವಣೆ ಮಾಡುವವರು. ಬಾಬಾ ಸಾಹೇಬ ಅಂಬೇಡಕರನಂತೆ.
·      ಪರಮ ದೈವ ಭಕ್ತರು.
·      ಜ್ಯೋತಿಷ್ಯಗಾರರಿಗೆ ಗುರುವಿನ ಅನುಗ್ರಹ ಇದ್ದಲ್ಲಿ ಬಹಳ ಒಳ್ಳೆಯದು.
·      ಪುರೋಹಿತ ಕೆಲಸವನ್ನು ಮಾಡುವವರು ಇವರೇ ಜಾಸ್ತಿ.
·      ಇವರು ಹಣ ಕಾಸು ಸಂಸ್ಥೆಯಾದ ರೆಸರ್ವ್ ಬೇಂಕ್, ಬ್ಯಾಕಿಂಗ್ ಕ್ಷೇತ್ರ ದಲ್ಲಿ ಜಾಸ್ತಿ ಕಾಣ ಸಿಗುತ್ತಾರೆ.
·      ಬುಧ ಗ್ರಹ ಹಣ ಕಾಸಿನ ವ್ಯವಹಾರವನ್ನ ಮಾಡುತ್ತಾರೆ. ಆದರೆ ಇವರುಗಳು ಈ ಸಂಸ್ಥೆಯಲ್ಲಿ ಕೆಲಸವನ್ನ ಮಾಡುತ್ತಿರುತ್ತಾರೆ.
·      ಇವರುಗಳು ವೈದ್ಯಕೀಯ ವೃತ್ತಿಯಲ್ಲಿ ಕೂಡ ಜಾಸ್ತಿ ಕಾಣ ಸಿಗುತ್ತಾರೆ. ಕಾರಣ ಜನತಾ ಸೇವೆಯೇ ಜನಾರ್ಧನ ಸೇವೆ.
·      ಆದರೆ ಅದೇ ಗುರು ಋಣಾತ್ಮಕವಾದಲ್ಲಿ:- ಬೇರವರನ್ನ ಬಯ್ಯುತ್ತಾರೆ.
·      ಬೇರವರಿಗೆ ಶ್ರಾಪ ಹಾಕುತ್ತಾರೆ.
·      ಇವರಿಗೆ ಹಳದಿ ಬಣ್ಣ ಹೆಚ್ಚು ಇಸ್ಟ.
·      ಹೊಟ್ಟೇ ಕಿಚ್ಚನ್ನ ಪಡುತ್ತಿರುತ್ತಾರೆ.
·      ಇನ್ನೊಬ್ಬರಿಗೆ ತೊಂದರೆಗಳನ್ನ ಕೊಡುವುದು ಜಾಸ್ತಿ ಆಗುತ್ತದೆ.
·      ಪುಷ್ಯರಾಗ ಇವರ ಪ್ರೀತಿಯ ರತ್ನ.
·      ಇವರುಗಳು ತುಂಬಾ ಲಕ್ಷಣವಂತರು.
·      ಒಂದೇ ಶೇಪಿನಲ್ಲಿರುತ್ತಾರೆ. ಆದರೆ ಹೊಟ್ಟೆ ಮುಂದು ಬರುತ್ತದೆ.
·      ಸಂಖೆ ೩
·      ಕಾರಕತ್ವ :- ಪುತ್ರ
·      ಉಛ್ಚ ರಾಶಿ ಕರ್ಕ
·      ನೀಚ ರಾಶಿ ಮಕರ
·      ಉಛ್ಚಾಂಶ :೫*
·      ದಶಾ ವರ್ಷ ೧೬
·      ಒಂದು ರಾಶಿಯಿಂದ ಇನ್ನೊಂದು ರಾಶಿಯ ಅವಧಿ ೧೨ ತಿಂಗಳು.
·      ದಿಕ್ಕು :- ಈಶಾನ್ಯ.
·      ಧಾನ್ಯ :- ಕಡ್ಲೆ
·      ಅಂಗಾಂಗ :- ಕಿವಿ.
·      ಕಾರಕ :- ಕಫ.
·      ದೃಸ್ಟಿ :- ೫,೭ ಮತ್ತು ೯.
·      ಮಿತ್ರ ಗ್ರಹಗಳು :- ಸೂರ್ಯ, ಚಂದ್ರ ಮತ್ತು ಕುಜ
·      ಶತ್ರು ಗ್ರಹಗಳು :- ಶುಕ್ರ ಮತ್ತು ಬುಧ
·      ಸಮ ಗ್ರಹಗಳು :- ಶನಿ. 

ಶುಕ್ರ ಗ್ರಹ :-

·      ಶುಕ್ರನು ವೃಷಭ ಮತ್ತು ತುಲಾದ ಅಧಿಪತಿ.
·      ವೃಷಭದಲ್ಲಿ ಪ್ರಥ್ವೀ ತತ್ವದಲ್ಲಿದ್ದರೆ, ತುಲಾದಲ್ಲಿ ವಾಯು ತತ್ವದಲ್ಲಿರುವನು.
·      ತುಲಾ ಶುಕ್ರನು ಬಹಳ ಧನಾತ್ಮಕನಾಗಿರುತ್ತಾರೆ. ಕಾರಣ ಅದು ಪುರುಷ ರಾಶಿ.
·      ಅದಕ್ಕೇ ತುಲಾ ಶುಕ್ರನಿಗೆ ಪ್ರಾಧಾನ್ಯ ಜಾಸ್ತಿ.
·      ಅದೇ ವೃಷಭದಲ್ಲಿ ಋಣಾತ್ಮಕನಾದುದರಿಂದ, ಶಕ್ತಿ ಹೀನ.
·      ಶುಕ್ರನು ಚಂದ್ರನಂತೆ ಸ್ತ್ರೀ ಗ್ರಹ.
·      ಚಂದ್ರನಂತೆಯೇ ಸೌಂದರ್ಯಕ್ಕೆ ಕಾರಕ ಗ್ರಹ.
·      ಒಳ್ಳೇ ಜ್ಯೋತಿಷ್ಯಗಾರರು. ಜ್ಯೋತಿಷ್ಯದಲ್ಲಿ ಪರಿಣಿತರು.
·      ಇವರಿಗೆ ಒಂದು ಒಳ್ಳೇ ಸ್ಟೇಂಡರ್ಡ್ ಉಂಟು.
·      ಶ್ರೀಮಂತ ಗ್ರಹ.
·      ಯಾರನ್ನೂ ಅತಿಯಾಗಿ ನಂಬೋಲ್ಲ ಹಾಗೂ ಹತ್ತಿರಕ್ಕೆ ಸೇರಿಸೋಲ್ಲ.
·      ಸದಾ ಸಂಶಯವನ್ನ ಪಡುವವರು.
·      ಇವರು ಜನರನ್ನ ಜಾಸ್ತಿ ಸ್ನೇಹಿತರನ್ನಾಗಿ ಮಾಡಿಕೊಳ್ಳೋಲ್ಲ.
·      ಇವರದ್ದು ಯಾವಾಗಲೂ ಒನ್ ವೇ ಟ್ರಾಫ಼ಿಕ್. ತಮ್ಮ ಕುದುರೆಗೆ ಮೂರೇ ಕಾಲು ಎನ್ನುವವರು.
·      ಕಾರಣ ಶುಕ್ರಚಾರ್ಯರಿಗೆ ಒಂದೇ ಕಣ್ಣು.
·      ಇವರುಗಳು ಹೇಳಿದ್ದೇ ಸರಿ.
·      ಇವರು ಶುಕ್ರಾಚಾರ್ಯನಂತೆ ಹಟ ಮಾಡುತ್ತಿರುತ್ತಾರೆ.
·      ಲಗ್ನದಲ್ಲಿ ಶುಕ್ರ ಇದ್ದಲ್ಲಿ ಅವರು ನೂರಕ್ಕೆ ನೂರು ಟ್ರಾಫ಼ಿಕ್ ಕೆಡಿಸುತ್ತಾರೆ.
·      ಶ್ರೀಮಂತ ವಸ್ತುಗಳ ಸಂಗ್ರಹವನ್ನ ಮಾಡುತ್ತಾರೆ.
·      ಮನೆಯನ್ನ ಅಲಂಕಾರ ಮಾಡುವ ಗ್ರಹ.
·      ಸುಗಂಧ ವಸ್ತುಗಳ ಸಂಗ್ರಹವನ್ನ ಮಾಡುವವರು.
·      ಇವರದ್ದು ಅದ್ಧೂರಿತನದ, ಆಡಂಬರದ ಮನೆ.
·      ಐಶಾರಾಮಿ ಜೀವನ ನಡೆಸುತ್ತಿರುತ್ತಾರೆ.
·      ಇವರಲ್ಲಿ ದೊಡ್ಡ ಗಾಡಿ ಇದೆ ಎಂದರೆ ಇವರ ಶುಕ್ರ ಬಹಳ ಒಳ್ಳೆಯದು.
·      ಇವರಲ್ಲಿಯ ಗಾಡಿ ಬಹಳ ನೀಟ್ ಎಂಡ್ ಕ್ಲೀನ್ ಆಗಿರುತ್ತದೆ.
·      ಇವರುಗಳು ಒಳ್ಳೇ ನ್ಯಾಯವಂತರು.
·      ಬಹಳ ಒಳ್ಳೆಯ ಹೊಂದಾಣಿಕೆಯನ್ನ ಮಾಡುವವರು.
·      ಇವರುಗಳು ಭಾವನಾತ್ಮಕ ಜೀವಿಗಳು.
·      ಇವರೂ ಕೂಡ ಶುಕ್ರಾಚಾರ್ಯನಂತೆ ಯಾರೊಂದಿಗೂ ಸೇರೋಲ್ಲ.ಒಂಟಿ ಜೀವಿಗಳು.
·      ವದ್ಯಕೀಯ ವೃತ್ತಿಯನ್ನ ಮಾಡುವವರು.
·      ಒಳ್ಳೇ ಪ್ರಾಧ್ಯಾಪಕ ವೃತ್ತಿಯನ್ನ ಮಾಡುವವರು.
·      ಶ್ರಂಗಾರ ವಿದ್ಯಗಳಲ್ಲಿ ಪ್ರವೀಣರು.
·      ನವ ರಸ ವಿದ್ಯಗಳಲ್ಲಿ ಪರಿಣಿತರು.
·      ೬೪ ಕಲೆಗಳ ರಾಜ.
·      ಶುಕ್ರನು ಒಳ್ಳೇ ದಿದ್ದರೆ ಮನೆಯಲ್ಲಿ ಘಂ ಅನ್ನುವ ಸುಗಂಧದ ಪರಿಮಳ ಬರುತ್ತೆ.
·      ಅದೇ ಬುಧನು ಒಳ್ಳೆಯದಿದ್ದಲ್ಲಿ, ಮನೆ ತುಂಬಾ ಪೇಪರ್, ಗಲೀಜು ಇರುತ್ತೆ.
·      ಅದೇ ಸೂರ್ಯನು ಸ್ಟ್ರೋಂಗ ಇದ್ದಲ್ಲಿ, ಕೆಲಸಗಾರು ಹೋಗಿ ಬಾಗಿಲನ್ನ ತೆಗೆಯುತ್ತಾರೆ.
·      ಅದೇ ಚಂದ್ರನು ಸ್ಟ್ರೋಂಗ್ ಇದ್ದಲ್ಲಿ, ಮನೆ ಒಡತಿ (ಹೆಂಡತಿ) ಬಾಗಿಲನ್ನ ತೆಗೆಯುತ್ತಾರೆ.
·      ಅದೇ ಮನೆ ತುಂಬಾ ಗಲೀಜುಗಳ ರಾಶಿ ಇದ್ದಲ್ಲಿ, ಶನಿ ಗ್ರಹ ಶಕ್ತಿಶಾಲಿಯಾಗಿರುತ್ತೆ.
·      ಕೆಟ್ಟ ಗುಣಾಗಳ ಶುಕ್ರ
·      ಅದೇ ಶುಕ್ರನಲ್ಲಿ ಕೆಟ್ಟ ಗುಣವಿದ್ದಲ್ಲಿ, ಹೊಟ್ಟೇ ಕಿಚ್ಚು ಜಾಸ್ತಿ.
·      ಜನರ ಜೊತೆಗೆ ಸೇರೋದಿಲ್ಲ!
·      ತನಗಿಂತಾ ಹೆಚ್ಚಿಗೆ ವಿದ್ಯ ಇತ್ತೆಂದರೆ, ಹೊಟ್ಟೇ ಕಿಚ್ಚು ಜಾಸ್ತಿ ಬರುತ್ತೆ!
·      ಒಂಟೀ ಜೀವಿಗಳು. ಇದಕ್ಕೆ ಕಾರಣ ಶುಕ್ರಾಚಾರ್ಯರು ಯಾರೊಂದಿಗೂ ಸೇರೋಲ್ಲ! ಇದಕ್ಕೆ ಮತ್ತೊಂದು ಕಾರಣ ತನಗೇ ಎಲ್ಲಾ ೬೪ ಕಲೆಗಳೂ ಗೊತ್ತೆನ್ನುವ ಅಹಂ!
·      ಆದರೆ ಇವರುಗಳು ಅತೀ ಉತ್ತಮ ರೀತಿಯಿಂದ ಹೊಂದಾಣಿಕೆಯನ್ನ ಮಾಡಿಕೊಳ್ಳುವರು.
·      ವಜ್ರ ಇವರ ರತ್ನ. ಪ್ಲೇಟಿನಮ್ ಸಿಲ್ವರ್
·      ಬಿಳಿ ಬಣ್ಣ ಇವರ ಫ಼ೇವರೈಟ್.
·      ಒಳ್ಳೇ ಸುಂದರವಾದ ಕೋಮಲ ಶರೀರ.
·      ಒಳ್ಳೇ ಫ಼ೈನ್ ಮತ್ತು ದೊಡ್ಡ ಮೋಡೆಲಿಂಗಿಗೆ ಬುಧ ಅಧಿಪತಿ ಆದರೆ ಫ಼ೈನ್ ಮೋಡೆಲಿಂಗಿಗೆ  ಶುಕ್ರ ಒಳ್ಳೇದಾಗಿ ಇರಬೇಕು.
·      ಇವರುಗಳ ಸಂಖೆ ೬
·      ಕಾರಕತ್ವ :- ಕಳತ್ರ
·      ಉಛ್ಚ ರಾಶಿ :- ಮೀನ
·      ನೀಚ ರಾಶಿ :-  ಕನ್ಯಾ
·      ದಶಾ ವರ್ಷ:- ೨೦
·      ಮೂಲತ್ರಿಕೋಣ :-ತುಲಾ ರಾಶಿ.
·      ಉಛ್ಛಾಂಶ :-೨೭*
·      ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಬೇಕಾಗುವ ಅವಧಿ :- ೧ ತಿಂಗಳು.
·      ದಿಕ್ಕು :- ಆಗ್ನೇಯ
·      ಧಾನ್ಯ :- ಅವರೆ
·      ಇಂದ್ರಿಯ :- ನಾಲಿಗೆ
·      ಕಾತ್ರಕ :- ಕಫ
·      ದೃಸ್ಟಿ :- ೭
·      ಮಿತ್ರ ಗ್ರಹಗಳು :- ಬುಧ, ಶನಿ
·      ಶತ್ರು ಗ್ರಹ :- ಸೂರ್ಯ ಮತ್ತು ಚಂದ್ರ
·      ಸಮ ಗ್ರಹ :- ಕುಜ, ಗುರು 

ಶನಿ ಗ್ರಹ :-

·      ಮಕರ ಮತ್ತು ಕುಂಭದ ಅಧಿಪತಿ ಶನಿ ದೇವ.
·      ಪ್ರಥ್ವಿ ತತ್ವ ಹಾಗೂ ವಾಯು ತತ್ವದ ಅಧಿಪತಿ.
·      ಇಲ್ಲಿ ಕುಂಭದ ಶನಿಗೆ ಬಹಳ ಮಹತ್ವ ಉಂಟು. ಅಂದರೆ ವಾಯು ತತ್ವದ ಶನಿ ದೇವನಿಗೆ.
·      ಹಾಗೆಯೇ ಮಿಥುನದ ವಾಯು ತತ್ವದ ಬುಧನಿಗೆ ಮಹತ್ವ ಕೊಟ್ಟಿರುತ್ತಾರೆ.
·      ಇವರುಗಳು ಬಡಕಲು ಶರೀರದವರು.
·      ಬಣ್ಣ ಕಪ್ಪು.
·      ರೋಗಗ್ರಸ್ಥರಾಗಿ ಕಾಣಿಸುತ್ತಾರೆ.
·      ಒಳ್ಳೇ ಶ್ರಮ ಜೀವಿಗಳು ಇವರುಗಳು.
·      ತತ್ವ ಜ್ನಾನಿಗಳು. ಅದೂ ಕುಂಭ ರಾಶಿಯವರು ತತ್ವಜಾನಿಗಳು (ಫಿಲೋಸಫ಼ರ್ಸ್).
·      ಇವರುಗಳಿಗೆ ಸಿದ್ಧಾಂತದ ಮೇಲೆ ನಂಬಿಕೆಯನ್ನ ಇಡುವವರು.
·      ಯಾರೂ ಮಾಡದ ಕೆಲಸವನ್ನ ಇವರು ಮಾಡುತ್ತಾರೆ.
·      ಇವರು ತಾಂತ್ರಿಕ ವರ್ಗದಲ್ಲಿ ಕೆಲಸವನ್ನ ಮಾಡುವವರು.
·      ಯಾವಾಗಲೋ ಮನೆಗೆ ಬರುತ್ತಾರೆಂದರೆ, ಅವರುಗಳು ಶನಿ ತತ್ವದವರು.
·      ಇವರುಗಳು ಒಳ್ಳೇ ಸಮಾಜ ಸೇವಕರು. ಅದೇ ಗುರು ತತ್ವದವರು, ಸಮಾಜ ಕಲ್ಯಾಣರು.
·      ಇವರುಗಳು ಒಳ್ಳೇ ನ್ಯಾಯವಾದಿಗಳು.
·      ಗೆಲ್ಲುವ ತನಕ ಹೋರಾಟವನ್ನ ಮಾಡುವಂತಹ ನಿಧಾನಿಗಳು. ಕಾರಣ ಶನಿಯು ಮಂದ ಗ್ರಹ. ತಾಳ್ಮೆ ಬಹಳ.
·      ಅದೇ ಬುಧ ಗ್ರಹ ಫಟ್ಟನೆ ಹೋಗಿ ಕೆಲಸವನ್ನ ಮುಗಿಸಿಯೇ ಬಿಡುತ್ತಾರೆ.
·      ಶನಿಯು ಮಂದ ಗ್ರಹ. ತಾಳ್ಮೆಯ ಗ್ರಹ.
·      ಕೆಟ್ಟ ಶನಿ ಇದ್ದಲ್ಲಿ ಅವರು ಬಹಳ ಮೋಸಗಾರರು. ಕಳ್ಳ ತನ ಮಾಡುವವರು.
·      ಕೆಟ್ಟ ಚಟಗಳಿಗೆ ಬಲಿಯಾಗುವವರು.
·      ಇವರುಗಳು ಕೆಟ್ಟದ್ದನ್ನ ಮಾಡಲೂ ಒಳ್ಳೇ ತಾಳ್ಮೆಯಿರುತ್ತದೆ.
·      ಟೆಕ್ನೋಲಜಿಯನ್ನ ಒಳ್ಳೇ ರೀತಿಯಲ್ಲಿ ನಿಭಾಯಿಸುವವರು, ಹಾಗೂ ಸಂಶೋಧನೆಯನ್ನ ಮಾಡುವವರು.
·      ಬಡಕಲು ಶರೀರವಾದರೂ ಒಳ್ಳೇ ಬಲವಿರುವಂತಹ ಮೂಳೆಗಳನ್ನ ಹೊಂದಿದವರು.
·      ಆದರೆ ಅದೇ ಮೂಳೆಯಲ್ಲಿ ಶಕ್ತಿ ಹೀನತೆಯನ್ನೂ ಕಾಣುವವರು.
·      ಇವರಿಗೆ ಮೊಣಕಾಲಿನ ನೋವು ಕಾಣಿಸಿಕೊಳ್ಳುತ್ತವೆ.
·      ಹೊಟ್ಟೇ ಸಂಬಂಧಿತ ತೊಂದರೆಗಳು ಸರ್ವೇ ಸಾಮಾನ್ಯ.
·      ಜನ ಸಂಘಟನೆಯನ್ನ ಮಾಡುವವರು.
·      ಅದೇ ಮುಷ್ಕರವನ್ನೂ ಮಾಡುವವರು ಇವರೇ.
·      ಕೊಳಕು ವಸ್ತ್ರ್ವನ್ನ ಧರಿಸುವವರು.
·      ಕೊಳಕು ಮನೆಯಲ್ಲಿ ನೆಲೆಸುವವರು.
·      ಯಾರಿಗೆ ಶನಿಯು ಪ್ರಬಲವಾಗಿದ್ದಾನೋ, ಅವರುಗಳು ಕಲ್ಲಿನ ಇಟ್ಟಿಗೆಯ ಮನೆಯನ್ನ ಕಟ್ಟುವವರು.
·      ಅದೇ ಕೆಟ್ಟ ಶನಿ ಇದ್ದಲ್ಲಿ, ಹಂಚಿನ ಮನೆಯಲ್ಲಿ ತಂಗುವವರು.
·      ಬಾಗಿಲು ತೂತಾಗಿ ಕಾಣಿಸೋದು.
·      ಹೊದೆಯುವ ಬಟ್ಟೆಗಳು ಕೊಳಕಾಗಿ ಕಾಣಿಸೋದು.
·      ನೀಲಿ ಬಣ್ಣದ ಸಫ಼ಾಯರನ್ನ ಧರಿಸಬೇಕು.
·      ಕಬ್ಬಿಣ ಇವರ ಲೋಹ.
·      ಸಂಖೆ :- ೮
·      ಕಾರಕತ್ವ:- ಆಯುಷ್ಯ
·      ಉಛ್ಚ ರಾಶಿ :- ತುಲಾ
·      ನೀಚ ರಾಶಿ :- ಮೇಷ
·      ಉಛ್ಛಾಂಷ :- ೨೦*
·      ದಿಕ್ಕು :- ಪಸ್ಚಿಮ
·      ಅಂಗಾಂಗ :- ಸ್ನಾಯು
·      ಇಂದ್ರಿಯ :- ಚರ್ಮ
·      ಧಾನ್ಯ :- ಎಳ್ಳು.
·      ಕಾರಕ :- ವಾತ
·      ದೃಸ್ಟಿ :- ೩,೭ ಮತ್ತು ೧೦.
·      ಮಿತ್ರ ಗ್ರಶಗಳು :- ಶುಕ್ರ ಮತ್ತು ಬುಧ.
·      ಶತ್ರು ಗ್ರಹ :- ಸೂರ್ಯ ಮತ್ತು ಕುಜ.
·      ಸಮ ಗ್ರಹ :- ಚಂದ್ರ ಮತ್ತು ಗುರು
·       

ರಾಹು ಗ್ರಹವು ಶನಿ ತತ್ವದ ಮೇಲೆಯೇ ನಿರ್ಭರಿಸಿದೆ. ಅಂದರೆ ರಾಹುವಿನ ತತ್ವಗಳೆಲ್ಲಾ ಶನಿಯ ತತ್ವದ್ದು.
ಅದೇ ಕೇತು ಗ್ರಹವು, ಕುಜ ಗ್ರಹದ ಮೇಲೆಯೇ ನಿರ್ಭರಿಸಿದೆ. ಕೇತುವಿನ ತತ್ವಗಳೆಲ್ಲಾ ಕುಜನ ತತ್ವದ್ದು.


Dr.ಪಾರಂಪಳ್ಳಿ ಸುರೇಂದ್ರ ಉಪಾಧ್ಯ, M.Sc.;Ph.D.
(Astrology)
೦೮/೦೨/೨೦೧೬

ಮೌನಿ ಅಮವಾಸ್ಯೆ.

No comments:

Post a Comment